ಹರಿಯ ಭಜಿಸಿದವರಿಗಿಲ್ಲ

ಹರಿಯ ಭಜಿಸಿದವರಿಗಿಲ್ಲ
ಹಸಿವು ಅನ್ನಾದಿಗಳಚಿಂತೆ|
ಹರಿಯ ಭಜಿಸಿದವರಿಗಿಲ್ಲ
ಜ್ಞಾನಾದಿಗಳ ಕೊರತೆ|
ಹರಿಯಭಜಿಸದಲೆ ಅಲೆದರೆಲ್ಲುಂಟು?
ಅಣುರೇಣುತೃಣಕಾಷ್ಠ ಅವನ
ಅಧೀನವಾಗಿರುವಾಗ||

ದುಡಿದವರಿಗೆಲ್ಲಾ
ಧನ ಕನಕಾದಿಗಳು ಪ್ರಾಪ್ತಿಯಾಗಿದಿದ್ದರೆ
ಕುಬೇರನ ಬಳಿಯಲ್ಲಿರುತ್ತಿತ್ತೇ ಭಂಡಾರ|
ಓದಿದವರಿಗೆಲ್ಲ ವಿದ್ಯೆ ಒಲಿದಿದ್ದರೆ
ಸರಸ್ವತಿ ಬಳಿ ಇರುತ್ತಿತೇ ಜ್ಞಾನಸಾಗರ
ಹರಿಯ ಕೃಪೆಯಿಂದಾಗಲಿಲ್ಲವೆ
ವಾಲ್ಮೀಕಿ ರಾಮಾಯಣ||

ಅಕ್ಷರವನರಿಯದ ಬಾಲಕ ತಿಮ್ಮಣ್ಣ
ಹರಿಯನುಭಜಿಸಿ ಆಸ್ಥಾನ ದಿವಾನನಾದ|
ಹರಿಯಭಜಿಸಿ ಅಂತ್ಯ ಸಮಯದಿ
ಅಜಮಿಳನು ಮೋಕ್ಷವ ಪಡೆದ|
ಈ ಕಲಿಯುಗದಲಿ
ಹರಿಯ ನಂಬಿದ ಕನಕದಾಸರು
ಶ್ರೀಕೃಷ್ಣನ ದರುಶನ ಪಡೆದರು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಯಿ ಹಾಲಲ್ಲಿ ನಂಜಿನ ಮಿಶ್ರಣ ?!
Next post ಗೋರಿ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys